Tuesday, 1 January 2013

"ಟೈಮ್"

                                    
 ಹಾಯ್ ಸ್ವೀಟಿ ಐ ಲವ್ ಯೂ" ಅಂತ ಮೊಬೈಲ್ ಸದ್ದು ಮಾಡಿತು ಯಾರು ಮೇಸೆಜ್ ಮಾಡಿದ್ದು ಅಂತ ಮೊಬೈಲ್ ನೋಡಿದೆ ನಾನು ಯಾವುದೋ ಹೊಸ ನಂಬರನಿಂದ "ಕಾಲ್ ಮಿ" ಅಂತ ಬಂದಿತ್ತು.ನನಗೆ ಯಾರು ಮೆಸೇಜ್ ಮಾಡಿದ್ದು ಅಂತ ತಿಳಿದುಕೊಳ್ಳಲ್ಲಿಕ್ಕೆ ಆ ನಂಬರಿಗೆ ಫೋನ್ ಮಾಡಿದೆ " ಹಲೋ ಅಂತು ಆ ಕಡೆಯಿಂದ ಕೋಗಿಲೆಯ ಕಂಠದಂತೆ ಇರುವ ಹುಡುಗಿಯ ಧ್ವನಿ.ನಾನು ಯಾರು ನೀವು ಯಾಕೆ ಮೇಸೆಜ್ ಮಾಡಿದ್ದು ಅಂತ ಕೇಳಿದೆ ಅದಕ್ಕೆ ಅವಳು ಐ ಯಾಮ್ ಸಾರಿ ನನ್ನ ಅಣ್ಣನಿಗೆ ಮಾಡಲ್ಲಿಕ್ಕೆ ಹೋಗಿ ನಿಮಗೆ ಮಾಡಿದೆ ತಪ್ಪಾಯ್ತು ಅಂದಳು.ಹೌದಾ ಆಯ್ತು ಬಿಡಿ ಅಂತ ಕಟ್ಟಮಾಡಿದೆ.ಆದರೆ ಅವಳ ಸ್ವರ ಮಾತ್ರ ಕಿವಿಯಲ್ಲಿ ಗುಯ್ ಗುಡುತ್ತಿತ್ತು.ಎಷ್ಟು ಮಧುರವಾಗಿದೆ ಅವಳ ಧ್ವನಿ ಇನ್ನು ಅವಳ ಸೌಂದರ್ಯ ಹೇಗಿರಬಹುದು ಅಂತ ಆಲೋಚಿಸುತ್ತಿರವಾಗಲೇ ಮೊಬೈಲ್ ಮತ್ತೆ ಸದ್ದು ಮಾಡಿತು ನೋಡಿದಾಗ ಅದೇ ನಂಬರಿನಿಂದ "ಥ್ಯಾಂಕ್ಸ್"ಅಂತ ಬರೆದಿತ್ತು.ನನಗೆ ತುಂಬಾ ಖುಷಿಯಾಯಿತು ಅವಳು ಪುನಃ ಮೇಸೆಜ್ ಮಾಡಿದ್ದಕ್ಕೆ.ನಾನು ಪುನಃ ಮೇಸೆಜ್ ಮಾಡಿ ಇಟ್ಸ್ ಒ.ಕೆ.ಅಂದೆ. ಅದಾದ ನಂತರ ದಿನ ಒಂದೊಂದು ಮೇಸೆಜ್ ಮಾಡುತ್ತಿದ್ದಳು ನಾನು ಅದಕ್ಕೆ ಉತ್ತರಿಸುತ್ತಿದ್ದೆ ಆಮೇಲೆ ಒಂದು ದಿನ ನನ್ನ ಫ್ರೆಂಡ್ ಮಾಡಿಕೊಳ್ಳುತ್ತೀರಾ ಅಂತ ಕೇಳಿದೆ.ಅವಳು ಆಯ್ತು ನಿಮ್ಮ ಹೆಸರೇನು ಅಂತ ಕೇಳಿದಳು ನಾನು ವಿನಯ್ ಅಂದೆ ಹಾಗೆ ಅವಳ ಹೆಸರು ಕೇಳಿದ್ದಕ್ಕೆ ಸ್ಮಿತಾ ಅಂದಳು.ಮುಖ ನೋಡದೆ ಗೆಳೆತನ ಶುರುಮಾಡಿದೆ.
  ನನ್ನ ಹೆಸರು ವಿನಯ್ ಅಂತ ಎಲ್ಲರೂ ವಿನು ಅಂತಾರೆ.ಕಷ್ಟಪಟ್ಟು ಓದಿದ್ದಕ್ಕೆ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು.ಅದು ಬೆಂಗಳೂರು ಎಂಬ ಮಾಯಾನಗರಿಯಲ್ಲಿ.ಮನೆಯಲ್ಲಿ ಅಷ್ಟು ದೂರ ಹೋಗುವುದು ಬೇಡ ಅಂದರೂ ಕೇಳದೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದೆ ರೂಮ್ ಮಾಡಿಕೊಂಡು ಒಂಟಿಯಾಗಿದ್ದೆ.ಕಂಪೆನಿಯ ಕೆಲಸಗಾರರು ಬಿಟ್ಟರೆ ಬೇರೆ ಯಾರು ಗೆಳೆತನವಿಲ್ಲದ ನನಗೆ ಹುಡುಗಿಯೊಬ್ಬಳು ಫೋನ್ ಗೆಳತಿ ಆಗಿ ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು.ಯಾವಾಗಲೂ ಅವಳಿಗೆ ಮೇಸೆಜ್ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದೆ.
 ಗೆಳೆತನ ಶುರುವಾಗಿ ಅದಾಗಲೇ ಒಂದುವಾರ ಕಳೆದಿತ್ತು. ನನಗೆ ಅವಳನ್ನು ನೋಡಬೇಕು ಅನ್ನಿಸುತ್ತಿತ್ತು.ಕೇಳಲ್ಲಿಕ್ಕೆ ಧೈರ್ಯವಿಲ್ಲದೆ ಸುಮ್ಮನಾಗಿದ್ದೆ..ಒಂದುದಿನ ಧೈರ್ಯ ಮಾಡಿ ನಿಮ್ಮನ್ನು ನೋಡಬೇಕು ಸ್ಮಿತಾರವರೆ ಅಂದಾಗ ಯಾಕೆ ಅಂತ ಕೇಳಿದಳು ನಾನು ಸುಮ್ಮನೆ ಕೂತೂಹಲಕ್ಕೆ ಅಂದೆ.ಆಯ್ತು ನಿಮಗೆ ಯಾವಾಗ ರಜೆ ಇರುತ್ತೆ ಅಂತ ಕೇಳಿದಳು ಸಂಡೆ ಅಂದಿದ್ದಕ್ಕೆ ನನಗೂ ಅವತ್ತು ರಜೆ ಎಲ್ಲಿ ಸಿಗುತ್ತೀರಾ ಅಂತ ಕೇಳಿದಳು.ನಾನು ನೀವೆ ಹೇಳಿ ಅಂದೆ.ಅದಕ್ಕೆ ಅವಳು ಸಂಡೆ ಬೆಳ್ಳಿಗ್ಗೆ ೯ ಗಂಟೆಗೆ ಕಬ್ಬನ್ ಪಾರ್ಕ್ ಹತ್ತಿರ ಒಬ್ಬರೆ ಬನ್ನಿ ಅಂದಳು.ನಾನು ನಿಮ್ಮನ್ನು ಗುರುತು ಹಿಡಿಯುವುದು ಹೇಗೆ ಅಂದಿದ್ದಕ್ಕೆ ನೀವು ಬ್ಯಾಕ್ ಪ್ಯಾಂಟ್ ಬ್ಲೂ ಟಿ_ಶರ್ಟ್ ಹಾಕಿಕೊಂಡು ಬನ್ನಿ ನಾನು ಗುರುತು ಹಿಡಿಯುತ್ತೇನೆ ಅಂದಳು.ನಾನು ಬರುತ್ತೀನಿ ಮಿಸ್ ಮಾಡಬಾರದು ಅಂದಿದ್ದಕ್ಕೆ ನಾನು ಬರುತ್ತೇನೆ ನೀವು ಮಿಸ್ ಮಾಡದಿದ್ದರೆ ಸಾಕು ಅಂದಳು.
 ಭಾನುವಾರ ಯಾವಾಗ ಬರುತ್ತೇ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ.ಬೆಳಿಗ್ಗೆ ಆದರೆ, ಅವಳನ್ನು ಮೀಟ್ ಮಾಡುತ್ತೀನಿ ಅನ್ನುವ ಖುಷಿ ನನಗೆ. ರಾತ್ರಿ ಮನೆಯಿಂದ ಅಮ್ಮ ಫೋನ್ ಮಾಡಿದ್ದಳು.ಕೆಲಸದ ಬಗ್ಗೆ, ನನ್ನ ಬಗ್ಗೆ ವಿಚಾರಿಸಿದಳು ನಾನು ಅಪ್ಪಿತಪ್ಪಿಯೂ ಆ ಹುಡುಗಿಯ ವಿಷಯ ಹೇಳಲಿಲ್ಲ.ಅಪ್ಪನು ಮಾತನಾಡಿದರು.ಅಮ್ಮ ತುಂಬಾ ಅದು ಇದು ಅಂತ ಮಾತನಾಡಿ ಹುಷಾರ್ ಆಗಿರು ಫೋನ್ ಇಟ್ಟರು.ನನಗೆ ಬೆಳಿಗ್ಗೆ ಆದರೆ ಸಾಕಿತ್ತು.
   ಬೆಳ್ಳಗ್ಗೆ ಎದ್ದು ಗಂಟೆ ಎಷ್ಟಾಯ್ತು ಅಂತ ಮೊಬೈಲ್ ನೋಡಿದಾಗ ರಾತ್ರಿ ಜಾಸ್ತಿ ಮಾತನಾಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಮೇಜಿನ ಮೇಲೆ ಅಪ್ಪ ಪ್ರೀತಿಯಿಂದ ಕೊಟ್ಟಿದ್ದ ವಾಚಿತ್ತು.ಟೈಮ್ ನೋಡಿದಾಗ ೭ ಗಂಟೆ ತೋರಿಸುತ್ತಿತ್ತು.ಮೊಬೈಲ್ ಚಾರ್ಜಗೆ ಹಾಕಿಬಿಟ್ಟು ಇನ್ನು ಸಮಯವಿದೆ ಅಂತ ಅಂದುಕೊಂಡು ಅಲ್ಲೆ ಮಲಗಿದೆ ಜೋರು ನಿದ್ರೆ ಬಂದಿತ್ತು ಫಟ್ ಅಂತ ಎಚ್ಚರಿಕೆ ಆಯ್ತು.ಟೈಮ್ ನೋಡಿದರೆ 7 ಗಂಟೆನೇ ತೋರಿಸುತ್ತಿತ್ತು.ತುಂಬಾ ದಿನಗಳಿಂದ ಕೀಲಿ(ಕೀ) ಕೊಡದೆ ಇರುವುದರಿಂದ ವಾಚ್ ನಿಂತಿತ್ತು ಅಂತ ಅವಾಗ ಗೊತ್ತಾಯಿತು.ಮೊಬೈಲ್ ಆನ್ ಮಾಡಿ ಗಂಟೆ ನೋಡಿದಾಗ 11 ಗಂಟೆ ಆಗಿತ್ತು. ಅವಳಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಅಂತ ಹೇಳಿತು ಸಿಟ್ಟು ಮಾಡಿಕೊಂಡಿರಬೇಕು ಅಂತ ಅಂದುಕೊಂಡೆ.ಅಪ್ಪ ಕೊಟ್ಟಿದ್ದ ವಾಚಿನ ಮೇಲೆ ಇನ್ನಿಲದಷ್ಟು ಸಿಟ್ಟು ಬಂದಿತ್ತು.ಎಲ್ಲಾ ಈ ವಾಚಿನಿಂದ ಆಗಿದ್ದು ಒಳ್ಳೆಯ ಗೆಳತಿಯನ್ನು ಕಳೆದುಕೊಂಡೆ ಅಂತ ಸಿಟ್ಟಿನಿಂದ ರೂಮಿನ ಮೂಲೆಗೆ ಬಿಸಾಡಿದೆ.ಅಪ್ಪ ಬೆಂಗಳೂರಿಗೆ ಬರುವಾಗ ಪ್ರೀತಿಯಿಂದ ಕೊಟ್ಟಿದ್ದ ವಾಚ್ ಅದು.ಹಳೆಯ ಕಾಲದ ಕೀಲಿಕೊಡುವ ವಾಚ್ ಆದ್ದರಿಂದ ನಾನು ಕಟ್ಟಿಕೊಳ್ಳುತ್ತಿರಲಿಲ್ಲ.ಈ ತರ ತೊಂದರೆ ನೀಡುತ್ತೆ ಅಂದುಕೊಂಡಿರಲಿಲ್ಲ ನಾನು.
 ಅದಾದ ನಂತರ ಆ ನಂಬರಿಗೆ ಅದೆಷ್ಟೇ ಸಲ ಫೋನ್ ಮಾಡಿದರು ಸ್ವಿಚ್ ಆಫ್ ಅಂತಾನೆ ಹೇಳುತ್ತಿತ್ತು.ಅವಳಿಗೆ ಬೇಜಾರಾಗಿ ನಂಬರ್ ಬದಲಾಯಿಸಿರಬೇಕು ಅಂದುಕೊಂಡು ಸುಮ್ಮನಾದೆ.ಆ ವಿಷಯ ಮರೆತುಬಿಟ್ಟಿದ್ದೆ.ರಜೆದಿನ ರೂಮಿನಲ್ಲಿ ಕುಳಿತುಕೊಂಡು ಟಿವಿ 9 ನೊಡುತ್ತಿದ್ದೆ.ಅದರಲ್ಲಿ ಒಂದು ಪ್ರೋಗ್ರಾಮ್ ಬರುತ್ತಿತ್ತು."ಹುಡುಗಿಯರ ಧ್ವನಿಗೆ ಮೋಸಹೋದ ಹುಡುಗರು"ಅಂತ. ಆರ್ಕುಟ್,ಫೇಸಬುಕ್ ನಲ್ಲಿರುವ ಹುಡುಗರ ಮೊಬೈಲ್ ನಂಬರ್ ತೆಗೆದುಕೊಂಡು ಹುಡುಗಿಯರ ಧ್ವನಿಯಲ್ಲಿ ಮಾತನಾಡಿ ಗೆಳೆತನ ಮಾಡಿಕೊಂಡು ಹುಡುಗರನ್ನು ಕರೆಸಿಕೊಂಡು ಅವರಲ್ಲಿರುವ ಮೊಬೈಲ್ ಹಣ,ಚಿನ್ನವನ್ನು ದೋಚುತ್ತಾರೆ ಅನ್ನುವ ಸುದ್ದಿ ಬರುತ್ತಿತ್ತು.ಮೋಸ ಹೋದ ಹುಡುಗರು ಮಾತನಾಡುತ್ತಿದ್ದರು ನನಗೆ ಭಯವಾಯಿತು ನನಗೆ ಫೋನ ಮಾಡಿ ಮಾತನಾಡಿದವಳು ಈ ಗುಂಪಿಗೆ ಸೇರಿದವಳಲ್ಲ ಅನ್ನುತ್ತಿರುವಾಗಲೇ ಮೊಬೈಲ್ ನಂಬರ್ ಕೊಡುತ್ತಿದ್ದರು ಅದರಲ್ಲಿ ನನಗೆ ಫೋನ್ ಬರುತ್ತಿದ್ದ ನಂಬರ್ ಸಹ ಇತ್ತು. ಹೃದಯ ಒಂದು ಸಲ ನಿಂತ ಹಾಗೆ ಆಯಿತು.ಎಷ್ಟು ಮೋಸ ಹೋದೆ ನಾನು ಹುಡುಗಿಯ ಸ್ವರ ಕೇಳಿ ಮೋಸ ಹೋಗಿದ್ದ ನನಗೆ ನನ್ನ ಬಗ್ಗೆ ಅಸಹ್ಯವಾಯಿತು.ಅವತ್ತು ವಾಚ್ ಸರಿಯಾಗಿ ಗಂಟೆ ತೋರಿಸಿದ್ದು ನಾನೇನಾದರೂ ಹೋಗಿದ್ದರೆ ಮೊಬೈಲ್ ಹಣ ಎಲ್ಲ ಕಳೆದುಕೊಳ್ಳುತ್ತಿದ್ದೆ ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು.ನನ್ನನ್ನು ಆ ಗಂಡಾಂತರದಿಂದ ಪಾರು ಮಾಡಿದ್ದು ಅಪ್ಪ ಕೊಟ್ಟ ವಾಚ್.ಅದಕೆಷ್ಟು ಧನ್ಯವಾದ ಹೇಳಿದರು ಸಾಲದು ಎಲ್ಲಿದೆ ಅಂತ ಹುಡುಕಿದಾಗ ರೂಮಿನ ಮೂಲೆಯಲ್ಲಿ ಬಿದ್ದಿತ್ತು.ಎತ್ತಿ ನೋಡಿದಾಗ ಗ್ಲಾಸ್ ಒಡೆದುಹೊಗಿತ್ತು.ನನ್ನ ಮಾನ ಹಣ ಕಾಪಾಡಿದ ವಾಚ್ ಗೆ  ಗ್ಲಾಸ್ ಹಾಕಿ ಕೈಗೆ ಕಟ್ಟಿಕೊಳ್ಳಲ್ಲಿಕ್ಕೆ ಶುರುಮಾಡಿದೆ..

        
                                                                -ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.
          



















2 comments: