ತಲೆಯೆಲ್ಲಾ ನೋವಿನಿಂದ ಕೂಡಿದ ಅನುಭವ,ನನ್ನ ಸುತ್ತಲೂ ತುಂಬಾ ಜನ ಮಾತಾಡುತ್ತಿದ್ದಾರೆ ಅಂತ ಅನಿಸುತ್ತಿದೆ.ಈವಾಗ ಎಲ್ಲಿದ್ದೇನೆ,ಏನಾಯ್ತು ಅಂತ ನೆನಪಿಗೆ ಬರುತ್ತಿಲ್ಲ.ಅಷ್ಟರಲ್ಲಿ ಅಪ್ಪ- ಅಮ್ಮ "ಮನು" ಅಂದರು ನಾನು "ಅಮ್ಮ ನಾವೆಲ್ಲಿದ್ದೇವೆ ಏನಾಯ್ತು ನನಗೆ ತಲೆ,ಮೈಕೈಯೆಲ್ಲಾ ತುಂಬಾ ನೋವಾಗುತ್ತಿದ್ದೆ ಅಂದಾಗ ನಾವೀಗ ಆಸ್ಪತ್ರೆಯಲ್ಲಿದ್ದೇವೆ ಅಂದರು ಅಮ್ಮ.ತಕ್ಷಣವೇ ಅಪ್ಪ-ಅಮ್ಮ ನಾನು ನನ್ನ ಮಡದಿ ಹಾಸಿನಿ ದೇವರ ದರ್ಶನಕ್ಕೆ ಹೋಗಿಬರುವಾಗ ಆದ ಅಪಘಾತದ ನೆನಪಾಯಿತು ಅಷ್ಟೇ ಮುಂದೆ ಏನಾಯಿತು ಅಂತ ನೆನಪಿಲ್ಲ.ಕೂಡಲೇ ಹಾಸಿನಿ ನೆನಪಾದಳು ದುಗುಡದಿಂದಲೇ ಅಮ್ಮನನ್ನು ಕೇಳಿದೆ "ಹಾಸಿನಿ" ಹೇಗಿದ್ದಾಳೆ ಆರೋಗ್ಯವಾಗಿದ್ದಾಳೆ ಅಲ್ವಾ ಅವಳಿಗೆ ಏನು ಪೆಟ್ಟಾಗಿಲ್ಲ ತಾನೇ?."ಚೆನ್ನಾಗಿದ್ದಾಳೆ ಸ್ವಲ್ಪ ಗಾಯವಾಗಿದೆ ಪಕ್ಕದ ವಾರ್ಡಿನಲ್ಲಿ ಮಲಗಿದ್ದಾಳೆ" ಅಂದರು.ತುಸುನೆಮ್ಮದಿಗೊಂಡಿತು ಮನಸ್ಸು.ನನ್ನ ಜೀವನಕ್ಕೆ ಬೆಳಕನ್ನು ತಂದವಳು ಹಾಸಿನಿ.ಅವಳು ನನ್ನ ಜೀವನಕ್ಕೆ ಬರದೇ ಹೋಗಿದ್ದರೆ ನನ್ನ ಜೀವನದಲ್ಲಿ ಬರಿ ಕತ್ತಲೆ ತುಂಬಿಕೊಂಡಿರುತ್ತಿತ್ತು.ಅವಳು ನನ್ನ ಜೀವನದೊಳಗೆ ಬಂದದ್ದು ನೆನಪಾಗಲ್ಲಿಕ್ಕೆ ಶುರುವಾಯಿತು
ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕನಸುಗಳಿರುತ್ತದೆ,ಕ್ರಿಕೇಟ್ ಆಟಗಾರ,ಸಿನಿಮಾ ನಾಯಕ,ರಾಜಕಾರಣಿ,ಶ್ರೀಮಂತ,ಪತ್ರಕರ್ತ,ವಿಜ್ಞಾನಿ ಮತ್ತು ಲೇಖಕನಾಗಬೇಕೆಂಬ ಕನಸುಗಳಿರುತ್ತದೆ.ಅದಕ್ಕಾಗಿ ಪ್ರಯತ್ನಿಸಿದರೆ ಅದು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ.ನನಗೆ ಇಂಥ ಕನಸುಗಳಿರಲಿಲ್ಲ ಆದರೆ ವಿಚಿತ್ರವಾದ ಕನಸೊಂದಿತ್ತು.ನಾನು ಪುಸ್ತಕಪ್ರಿಯ ಅದಕ್ಕೆ ಬಾಲ್ಯದಿಂದಲೂ ಪುಸ್ತಕವನ್ನು ಸಂಗ್ರಹಿಸಿಡುತ್ತಿದ್ದೆ.ಆದರೆ ಅಲ್ಲಿರುವ ಯಾವ ಪುಸ್ತಕಗಳನ್ನು ಓದಿರಲಿಲ್ಲ "ಓದಲ್ಲಿಕ್ಕೆ ಸಾಧ್ಯವಾಗುತ್ತಿರಲ್ಲಿಲ್ಲ ನನ್ನಿಂದ".ಎಲ್ಲಾ ಕೇಳುತ್ತಿದ್ದರು ಪುಸ್ತಕ ಓದದೇ ಇರುವವನ್ನು ಪುಸ್ತಕಗಳನ್ನು ಯಾಕೆ ತಂದು ಸಂಗ್ರಹಿಸುತ್ತಿಯಾ ಅಂತ. ನಾನು ಅದಕ್ಕೆ ಇದೆಲ್ಲ ನನ್ನ ಹೆಂಡತಿಯಾಗಿ ಬರುವವಳಿಗೆ ನನ್ನ ಉಡುಗೊರೆ. ಅವಳು ಪ್ರೀತಿಯಿಂದ ಓದಿ ನನಗೆ ಹೇಳಬೇಕು ಇದು ನನ್ನ ಜೀವನದ ಕನಸು ಅಂತ ಹೇಳುತ್ತಿದ್ದೆ.ಅವರೆಲ್ಲ ನಗಾಡಿಕೊಳ್ಳುತ್ತಿದ್ದರು ನನ್ನ ಕನಸಿನ ಬಗ್ಗೆ.
ನನ್ನ ಬಗ್ಗೆ,ನನ್ನ ಪ್ರೀತಿಯ ಕನಸಿನ ಬಗ್ಗೆ ತಿಳಿದವರು ಯಾರು ಹೆಣ್ಣು ಕೊಡುವುದಕ್ಕೆ ಮುಂದೆ ಬರಲಿಲ್ಲ.ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಅಪ್ಪ-ಅಮ್ಮ ನನಗೆ ಮದುವೆ ಮಾಡಲೇಬೇಕು ಅಂತ ತುಂಬಾ ಹುಡುಕಾಡಿ ಕೊನೆಗೂ ಒಬ್ಬಳನ್ನು ಹುಡುಕಿದರು ಅವಳೇ ಹಾಸಿನಿ. ನಾನು ಅಮ್ಮನ ಹತ್ತಿರ ಹೇಳಿದೆ ಆ ಹುಡುಗಿಯ ಜೊತೆ ಮಾತನಾಡಬೇಕು ಅಂದಾಗ ಅಮ್ಮ ಒಪ್ಪಿಗೆ ಕೊಟ್ಟು ಮರುದಿನ ಹಾಸಿನಿ ಬಂದಳು.ಅಮ್ಮ ನನ್ನ ಜೊತೆಯಲ್ಲಿಯೇ ಕುಳಿತುಕೊಂಡಿದ್ದರು.ನಾನು ನಿಮ್ಮ ಹೆಸರೇನು? ಏನು ಮಾಡಿಕೊಂಡಿದ್ದೀರಾ?.ಅದಕ್ಕೆ ಹಾಸಿನಿ ನಗುತ್ತ "ನನ್ನ ಹೆಸರು ಹಾಸಿನಿ ನಾನು ಕುರುಡರ ಅನಾಥಾಶ್ರಮದಲ್ಲಿ ಕುರುಡು ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಕೆಲಸ ಮಾಡುತ್ತಿದ್ದೇನೆ" ನಾನು "ಅಪ್ಪ-ಅಮ್ಮ ಏನು ಮಾಡುತ್ತಾರೆ?" ಅವಳು "ನನಗೆ ಅಪ್ಪ-ಅಮ್ಮ ಯಾರು ಇಲ್ಲ ನಾನು ಅದೇ ಅನಾಥಾಶ್ರಮದಲ್ಲಿ ಬೆಳೆದವಳು ಈವಾಗ ಅಲ್ಲಿಯೇ ಇದ್ದೇನೆ" ಅಂದಳು ನಾನು ಸಾರಿ ಕೇಳಿದೆ ನಂತರ "ನನ್ನ ಬಗ್ಗೆ ಪೂರ್ತಿ ತಿಳಿದುಕೊಂಡಿದ್ದೀರಾ ತಾನೇ ನಮ್ಮ ಅಪ್ಪ-ಅಮ್ಮನ ಒತ್ತಾಯಕ್ಕೆ ಅಥವಾ ಅನುಕಂಪಕ್ಕೊ ನನ್ನನ್ನು ಮದುವೆಯಾಗುತ್ತೀನಿ ಅಂದರೆ ನಾನು ಇದಕ್ಕೆ ಒಪ್ಪುದಿಲ್ಲ ಅಂದೆ.ಅದಕ್ಕವಳು ನಾನು ಯಾರ ಒತ್ತಾಯಕ್ಕೆ ಮಣಿದಿಲ್ಲ. ನಿಮ್ಮಂಥವರನ್ನು ಮದುವೆಯಾಗುವುದು ನನ್ನ ಅದೃಷ್ಟ ನಾನು ಮನಸಾರೆ ನಿಮ್ಮನ್ನು ಮದುವೆಯಾಗುವುದಕ್ಕೆ ಒಪ್ಪಿದ್ದೇನೆ ನೀವು ಒಪ್ಪಿದರೆ ನಿಮ್ಮ ಕಣ್ಣಾಗಿರುತ್ತೇನೆ ಅಂದಾಗ ನನಗೆ ತುಂಬಾ ಖುಷಿಯಾಯಿತು.ನಾನು ಒಪ್ಪಿಗೆಕೊಟ್ಟೆ ಸರಳ ರೀತಿಯಲ್ಲಿ ನಮ್ಮಿಬ್ಬರ ವಿವಾಹ ಜರುಗಿತು.
ನಾನು ಅಂದುಕೊಂಡಿದ್ದಕ್ಕಿಂತಲೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ನನ್ನ ಮುದ್ದು ಮಡದಿ.ನಾನು ಅವಳು ಬಂದಮೇಲೆ ನಾನು ಅಪ್ಪ-ಅಮ್ಮ ತುಂಬಾ ಸಂತೋಷವಾಗಿದ್ದೇವು.ನಮ್ಮ ಸುಖಸಂಸಾರ ನೋಡಿ ದೇವರಿಗೆ ಅಸೂಯೆ ಉಂಟಾಯಿತು ಅನಿಸುತ್ತದೆ.ಮದುವೆಯಾದ ಮೇಲೆ ಪ್ರಥಮಬಾರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ ಹೋಗಿದ್ದೇವು ಹೋಗಿ ಬರುವಾಗ ಆಗಿರುವುದು ಅಪಘಾತ.ಕೂಡಲೇ ವಾಸ್ತವಕ್ಕೆ ಬಂದೆ ಅಪ್ಪ ಮತ್ತು ಡಾಕ್ಟರ್ ಮಾತನಾಡುತ್ತಿದ್ದರು.ಅದಾದ ಒಂದು ವಾರ ಕೂಡ ಹಾಸಿನಿಯನ್ನು ಮಾತನಾಡಿಸಲ್ಲಿಕ್ಕೆ ಆಗಲಿಲ್ಲ.ಅಪ್ಪ-ಅಮ್ಮ ನನ್ನಿಂದ ಏನೋ ಮುಚ್ಚಿಡುತ್ತಾರೆ ಅನಿಸಲ್ಲಿಕ್ಕೆ ಶುರುವಾಯಿತು.
ಡಾಕ್ಟರ್ ಬಂದು ಕಣ್ಣಿಗೆ,ತಲೆಗೆ ಸುತ್ತಿದ ಬ್ಯಾಂಡೇಜ್ ಬಿಚ್ಚುವುದಕ್ಕೆ ಶುರುಮಾಡಿದರು.ಡಾಕ್ಟರ್ ಮನು ನಿಧಾನವಾಗಿ ಕಣ್ಣು ತೆರೆಯಿರಿ ಅಂದರು ನನಗೆ ಆಶ್ಚರ್ಯವಾಯಿತು ಆದರೂ ಧೈರ್ಯಮಾಡಿ ಕಣ್ಣುತೆರೆದು ನೋಡಿದರೆ ವಯಸ್ಸಾದ ದಂಪತಿಗಳು ಪಕ್ಕದಲ್ಲಿ ಡಾಕ್ಟರ್ ಇದ್ದರು.ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಟ್ಟುಕುರುಡನಾದ ನನಗೆ ಮೊದಲಬಾರಿಗೆ ದೃಷ್ಟಿ ಬಂದಿತ್ತು ಯಾರು ನನಗೆ ಕಣ್ಣು ದಾನ ಮಾಡಿದರೋ ಗೊತ್ತಿಲ್ಲ.ಕಣ್ಣು ಕೊಟ್ಟವರಿಗೆ ಮನಸ್ಸಿನಲ್ಲಿಯೇ ವಂದಿಸಿದೆ.ಅಲ್ಲಿ ನಿಂತಿರುವವರೇ ನನ್ನ ತಂದೆ-ತಾಯಿ ಅಂತ ಗೊತ್ತಾಯಿತು.ಅಪ್ಪ-ಅಮ್ಮನನ್ನು ಕಣ್ಣುತುಂಬಾ ನೋಡಿದೆ.ಅಮ್ಮ ಹಾಸಿನಿಯನ್ನು ನೋಡಬೇಕು ಏಲ್ಲಿದ್ದಾಳೆ ಅಂತ ಕೇಳಿದೆ.ಅಮ್ಮ ಅಳುವುದಕ್ಕೆ ಶುರುಮಾಡಿದಳು.ಅವಾಗ ಡಾಕ್ಟರ್ "ಮನು ಸ್ವಲ್ಪ ಧೈರ್ಯ ತಂದುಕೊಳ್ಳಿ ನಿಮ್ಮ ಕಾರಿಗೆ ಅಪಘಾತದಲ್ಲಿ ನಿಮ್ಮ ಪತ್ನಿ ಅಸುನೀಗಿದ್ದಾರೆ ಅವರ ಎರಡು ಕಣ್ಣನ್ನು ನಿಮಗೆ ಹಾಕಿದ್ದೇವೆ ಅಂದರು.ನನಗೆ ಆ ಮಾತು ಕೇಳಿದ ಕೂಡಲೇ ಆ ಕ್ಷಣವೇ ನಾನು ಸತ್ತುಹೋಗಿದ್ದರೆ ಖುಷಿಯಾಗುತ್ತಿದ್ದೆ .ಕಣ್ಣು ಬಂದು ಖುಷಿಗಿಂತ ನನ್ನ ಮುದ್ದುಮಡದಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ನನಗೆ ತಡೆಯಲಾರದ ನೋವು ಕೊಟ್ಟಿತ್ತು.
ಹುಟ್ಟುಕುರುಡನಾದ ನನ್ನನ್ನು ಮದುವೆಯಾಗಿ ನನಗೆ ಖುಷಿಕೊಟ್ಟವಳು.ನಿಮಗೆ ಬಾಳಿನುದ್ದಕ್ಕೂ ಕಣ್ಣಾಗಿರುತ್ತೇನೆ ಅಂತ ಹೇಳಿದವಳು ಕೊನೆಗೂ ತನ್ನ ಕಣ್ಣನ್ನು ನನಗೆ ನೀಡಿ ಅವಳ ಮಾತನ್ನು ಉಳಿಸಿಕೊಂಡಿದ್ದಳು.ಕೊನೆಯ ಬಾರಿ ಅವಳ ಮುಖದರ್ಶನವೇ ನೀಡದೆ ಹೋದಳು.ನನ್ನ ಕೈಯಲ್ಲಿರುವ ನಮ್ಮಿಬ್ಬರ ಪೋಟೊದ ಮೇಲೆ ಅವಳ ಕಣ್ಣಿನಿಂದ ನನ್ನ ಹೃದಯದ ನೋವು ಕಣ್ಣೀರಾಗಿ ಕೆಳಗೆ ಬೀಳುತ್ತಿತ್ತು
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ
ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಕನಸುಗಳಿರುತ್ತದೆ,ಕ್ರಿಕೇಟ್ ಆಟಗಾರ,ಸಿನಿಮಾ ನಾಯಕ,ರಾಜಕಾರಣಿ,ಶ್ರೀಮಂತ,ಪತ್ರಕರ್ತ,ವಿಜ್ಞಾನಿ ಮತ್ತು ಲೇಖಕನಾಗಬೇಕೆಂಬ ಕನಸುಗಳಿರುತ್ತದೆ.ಅದಕ್ಕಾಗಿ ಪ್ರಯತ್ನಿಸಿದರೆ ಅದು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ.ನನಗೆ ಇಂಥ ಕನಸುಗಳಿರಲಿಲ್ಲ ಆದರೆ ವಿಚಿತ್ರವಾದ ಕನಸೊಂದಿತ್ತು.ನಾನು ಪುಸ್ತಕಪ್ರಿಯ ಅದಕ್ಕೆ ಬಾಲ್ಯದಿಂದಲೂ ಪುಸ್ತಕವನ್ನು ಸಂಗ್ರಹಿಸಿಡುತ್ತಿದ್ದೆ.ಆದರೆ ಅಲ್ಲಿರುವ ಯಾವ ಪುಸ್ತಕಗಳನ್ನು ಓದಿರಲಿಲ್ಲ "ಓದಲ್ಲಿಕ್ಕೆ ಸಾಧ್ಯವಾಗುತ್ತಿರಲ್ಲಿಲ್ಲ ನನ್ನಿಂದ".ಎಲ್ಲಾ ಕೇಳುತ್ತಿದ್ದರು ಪುಸ್ತಕ ಓದದೇ ಇರುವವನ್ನು ಪುಸ್ತಕಗಳನ್ನು ಯಾಕೆ ತಂದು ಸಂಗ್ರಹಿಸುತ್ತಿಯಾ ಅಂತ. ನಾನು ಅದಕ್ಕೆ ಇದೆಲ್ಲ ನನ್ನ ಹೆಂಡತಿಯಾಗಿ ಬರುವವಳಿಗೆ ನನ್ನ ಉಡುಗೊರೆ. ಅವಳು ಪ್ರೀತಿಯಿಂದ ಓದಿ ನನಗೆ ಹೇಳಬೇಕು ಇದು ನನ್ನ ಜೀವನದ ಕನಸು ಅಂತ ಹೇಳುತ್ತಿದ್ದೆ.ಅವರೆಲ್ಲ ನಗಾಡಿಕೊಳ್ಳುತ್ತಿದ್ದರು ನನ್ನ ಕನಸಿನ ಬಗ್ಗೆ.
ನನ್ನ ಬಗ್ಗೆ,ನನ್ನ ಪ್ರೀತಿಯ ಕನಸಿನ ಬಗ್ಗೆ ತಿಳಿದವರು ಯಾರು ಹೆಣ್ಣು ಕೊಡುವುದಕ್ಕೆ ಮುಂದೆ ಬರಲಿಲ್ಲ.ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಅಪ್ಪ-ಅಮ್ಮ ನನಗೆ ಮದುವೆ ಮಾಡಲೇಬೇಕು ಅಂತ ತುಂಬಾ ಹುಡುಕಾಡಿ ಕೊನೆಗೂ ಒಬ್ಬಳನ್ನು ಹುಡುಕಿದರು ಅವಳೇ ಹಾಸಿನಿ. ನಾನು ಅಮ್ಮನ ಹತ್ತಿರ ಹೇಳಿದೆ ಆ ಹುಡುಗಿಯ ಜೊತೆ ಮಾತನಾಡಬೇಕು ಅಂದಾಗ ಅಮ್ಮ ಒಪ್ಪಿಗೆ ಕೊಟ್ಟು ಮರುದಿನ ಹಾಸಿನಿ ಬಂದಳು.ಅಮ್ಮ ನನ್ನ ಜೊತೆಯಲ್ಲಿಯೇ ಕುಳಿತುಕೊಂಡಿದ್ದರು.ನಾನು ನಿಮ್ಮ ಹೆಸರೇನು? ಏನು ಮಾಡಿಕೊಂಡಿದ್ದೀರಾ?.ಅದಕ್ಕೆ ಹಾಸಿನಿ ನಗುತ್ತ "ನನ್ನ ಹೆಸರು ಹಾಸಿನಿ ನಾನು ಕುರುಡರ ಅನಾಥಾಶ್ರಮದಲ್ಲಿ ಕುರುಡು ಮಕ್ಕಳಿಗೆ ಪಾಠ ಹೇಳಿಕೊಡುವ ಟೀಚರ್ ಕೆಲಸ ಮಾಡುತ್ತಿದ್ದೇನೆ" ನಾನು "ಅಪ್ಪ-ಅಮ್ಮ ಏನು ಮಾಡುತ್ತಾರೆ?" ಅವಳು "ನನಗೆ ಅಪ್ಪ-ಅಮ್ಮ ಯಾರು ಇಲ್ಲ ನಾನು ಅದೇ ಅನಾಥಾಶ್ರಮದಲ್ಲಿ ಬೆಳೆದವಳು ಈವಾಗ ಅಲ್ಲಿಯೇ ಇದ್ದೇನೆ" ಅಂದಳು ನಾನು ಸಾರಿ ಕೇಳಿದೆ ನಂತರ "ನನ್ನ ಬಗ್ಗೆ ಪೂರ್ತಿ ತಿಳಿದುಕೊಂಡಿದ್ದೀರಾ ತಾನೇ ನಮ್ಮ ಅಪ್ಪ-ಅಮ್ಮನ ಒತ್ತಾಯಕ್ಕೆ ಅಥವಾ ಅನುಕಂಪಕ್ಕೊ ನನ್ನನ್ನು ಮದುವೆಯಾಗುತ್ತೀನಿ ಅಂದರೆ ನಾನು ಇದಕ್ಕೆ ಒಪ್ಪುದಿಲ್ಲ ಅಂದೆ.ಅದಕ್ಕವಳು ನಾನು ಯಾರ ಒತ್ತಾಯಕ್ಕೆ ಮಣಿದಿಲ್ಲ. ನಿಮ್ಮಂಥವರನ್ನು ಮದುವೆಯಾಗುವುದು ನನ್ನ ಅದೃಷ್ಟ ನಾನು ಮನಸಾರೆ ನಿಮ್ಮನ್ನು ಮದುವೆಯಾಗುವುದಕ್ಕೆ ಒಪ್ಪಿದ್ದೇನೆ ನೀವು ಒಪ್ಪಿದರೆ ನಿಮ್ಮ ಕಣ್ಣಾಗಿರುತ್ತೇನೆ ಅಂದಾಗ ನನಗೆ ತುಂಬಾ ಖುಷಿಯಾಯಿತು.ನಾನು ಒಪ್ಪಿಗೆಕೊಟ್ಟೆ ಸರಳ ರೀತಿಯಲ್ಲಿ ನಮ್ಮಿಬ್ಬರ ವಿವಾಹ ಜರುಗಿತು.
ನಾನು ಅಂದುಕೊಂಡಿದ್ದಕ್ಕಿಂತಲೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು ನನ್ನ ಮುದ್ದು ಮಡದಿ.ನಾನು ಅವಳು ಬಂದಮೇಲೆ ನಾನು ಅಪ್ಪ-ಅಮ್ಮ ತುಂಬಾ ಸಂತೋಷವಾಗಿದ್ದೇವು.ನಮ್ಮ ಸುಖಸಂಸಾರ ನೋಡಿ ದೇವರಿಗೆ ಅಸೂಯೆ ಉಂಟಾಯಿತು ಅನಿಸುತ್ತದೆ.ಮದುವೆಯಾದ ಮೇಲೆ ಪ್ರಥಮಬಾರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಧರಿಸಿ ಹೋಗಿದ್ದೇವು ಹೋಗಿ ಬರುವಾಗ ಆಗಿರುವುದು ಅಪಘಾತ.ಕೂಡಲೇ ವಾಸ್ತವಕ್ಕೆ ಬಂದೆ ಅಪ್ಪ ಮತ್ತು ಡಾಕ್ಟರ್ ಮಾತನಾಡುತ್ತಿದ್ದರು.ಅದಾದ ಒಂದು ವಾರ ಕೂಡ ಹಾಸಿನಿಯನ್ನು ಮಾತನಾಡಿಸಲ್ಲಿಕ್ಕೆ ಆಗಲಿಲ್ಲ.ಅಪ್ಪ-ಅಮ್ಮ ನನ್ನಿಂದ ಏನೋ ಮುಚ್ಚಿಡುತ್ತಾರೆ ಅನಿಸಲ್ಲಿಕ್ಕೆ ಶುರುವಾಯಿತು.
ಡಾಕ್ಟರ್ ಬಂದು ಕಣ್ಣಿಗೆ,ತಲೆಗೆ ಸುತ್ತಿದ ಬ್ಯಾಂಡೇಜ್ ಬಿಚ್ಚುವುದಕ್ಕೆ ಶುರುಮಾಡಿದರು.ಡಾಕ್ಟರ್ ಮನು ನಿಧಾನವಾಗಿ ಕಣ್ಣು ತೆರೆಯಿರಿ ಅಂದರು ನನಗೆ ಆಶ್ಚರ್ಯವಾಯಿತು ಆದರೂ ಧೈರ್ಯಮಾಡಿ ಕಣ್ಣುತೆರೆದು ನೋಡಿದರೆ ವಯಸ್ಸಾದ ದಂಪತಿಗಳು ಪಕ್ಕದಲ್ಲಿ ಡಾಕ್ಟರ್ ಇದ್ದರು.ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಟ್ಟುಕುರುಡನಾದ ನನಗೆ ಮೊದಲಬಾರಿಗೆ ದೃಷ್ಟಿ ಬಂದಿತ್ತು ಯಾರು ನನಗೆ ಕಣ್ಣು ದಾನ ಮಾಡಿದರೋ ಗೊತ್ತಿಲ್ಲ.ಕಣ್ಣು ಕೊಟ್ಟವರಿಗೆ ಮನಸ್ಸಿನಲ್ಲಿಯೇ ವಂದಿಸಿದೆ.ಅಲ್ಲಿ ನಿಂತಿರುವವರೇ ನನ್ನ ತಂದೆ-ತಾಯಿ ಅಂತ ಗೊತ್ತಾಯಿತು.ಅಪ್ಪ-ಅಮ್ಮನನ್ನು ಕಣ್ಣುತುಂಬಾ ನೋಡಿದೆ.ಅಮ್ಮ ಹಾಸಿನಿಯನ್ನು ನೋಡಬೇಕು ಏಲ್ಲಿದ್ದಾಳೆ ಅಂತ ಕೇಳಿದೆ.ಅಮ್ಮ ಅಳುವುದಕ್ಕೆ ಶುರುಮಾಡಿದಳು.ಅವಾಗ ಡಾಕ್ಟರ್ "ಮನು ಸ್ವಲ್ಪ ಧೈರ್ಯ ತಂದುಕೊಳ್ಳಿ ನಿಮ್ಮ ಕಾರಿಗೆ ಅಪಘಾತದಲ್ಲಿ ನಿಮ್ಮ ಪತ್ನಿ ಅಸುನೀಗಿದ್ದಾರೆ ಅವರ ಎರಡು ಕಣ್ಣನ್ನು ನಿಮಗೆ ಹಾಕಿದ್ದೇವೆ ಅಂದರು.ನನಗೆ ಆ ಮಾತು ಕೇಳಿದ ಕೂಡಲೇ ಆ ಕ್ಷಣವೇ ನಾನು ಸತ್ತುಹೋಗಿದ್ದರೆ ಖುಷಿಯಾಗುತ್ತಿದ್ದೆ .ಕಣ್ಣು ಬಂದು ಖುಷಿಗಿಂತ ನನ್ನ ಮುದ್ದುಮಡದಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ನನಗೆ ತಡೆಯಲಾರದ ನೋವು ಕೊಟ್ಟಿತ್ತು.
ಹುಟ್ಟುಕುರುಡನಾದ ನನ್ನನ್ನು ಮದುವೆಯಾಗಿ ನನಗೆ ಖುಷಿಕೊಟ್ಟವಳು.ನಿಮಗೆ ಬಾಳಿನುದ್ದಕ್ಕೂ ಕಣ್ಣಾಗಿರುತ್ತೇನೆ ಅಂತ ಹೇಳಿದವಳು ಕೊನೆಗೂ ತನ್ನ ಕಣ್ಣನ್ನು ನನಗೆ ನೀಡಿ ಅವಳ ಮಾತನ್ನು ಉಳಿಸಿಕೊಂಡಿದ್ದಳು.ಕೊನೆಯ ಬಾರಿ ಅವಳ ಮುಖದರ್ಶನವೇ ನೀಡದೆ ಹೋದಳು.ನನ್ನ ಕೈಯಲ್ಲಿರುವ ನಮ್ಮಿಬ್ಬರ ಪೋಟೊದ ಮೇಲೆ ಅವಳ ಕಣ್ಣಿನಿಂದ ನನ್ನ ಹೃದಯದ ನೋವು ಕಣ್ಣೀರಾಗಿ ಕೆಳಗೆ ಬೀಳುತ್ತಿತ್ತು
ಎನ್.ರಾಜೇಶ್.ಕುಮಾರ್.ನೇರಳಕಟ್ಟೆ