Tuesday, 19 March 2013

"ಪ್ರೀತಿ ಮಧುರ ತ್ಯಾಗ ಅಮರ"

  ತುಂಬಾ ವರ್ಷಗಳಿಂದ ಉದ್ಯೋಗ ಮತ್ತು ಸಂಬಳ ನೀಡುತ್ತಿದ್ದ ಕಂಪನಿ ಇತ್ತೀಚೆಗೆ ತುಂಬಾ ನಷ್ಟದಲ್ಲಿ ನಡೆಯುತ್ತಿದೆ.ಕಂಪನಿಯ ಮಾಲೀಕರು ಕಷ್ಟದಲ್ಲಿದ್ದಾರೆ ಎಂದು ಆ ಕಂಪನಿಯ ಉದ್ಯೋಗಿಗಳು ಒಂದು ತಿಂಗಳು ಸಂಬಳ ತ್ಯಾಗ ಮಾಡಿದರೆ ಮಾಲೀಕರು ಸ್ವಲ್ಪ ಸುಧಾರಿಸುತ್ತಾರೆ ಅಂತ ಎಲ್ಲರಿಗೂ ಗೊತ್ತು ಆದರೂ ಯಾರು ತಮ್ಮ ಸಂಬಳ ತ್ಯಾಗ ಮಾಡುವುದಕ್ಕೆ ಸಿದ್ಧರಿಲ್ಲ...
  ತುಂಬಾ ಕಷ್ಟದಲ್ಲಿರುವ ಪ್ರಾಣಸ್ನೇಹಿತನಿಗೆ ಸಹಾಯ ಮಾಡಿರುವ ಹಣವನ್ನು ಕೇಳದೇ ಆ ಹಣವನ್ನು ಕೊಡುವುದು ಬೇಡ ಅಂತ ತ್ಯಾಗ ಮಾಡುವುದಕ್ಕೆ ಯಾರು ಸಿದ್ಧರಿಲ್ಲ...
 ಆದರೆ ಎಲ್ಲರೂ ತಮ್ಮ ಪ್ರೀತಿಯನ್ನು ಅವಳಿಗೋಸ್ಕರ ಅವಳ ಮನೆಯವರಿಗೋಸ್ಕರ ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ ಅಂತ ದೊಡ್ಡದಾಗಿ ಎಲ್ಲರೆದುರು ತನ್ನ ತ್ಯಾಗವನ್ನು ಕೊಚ್ಚಿಕೊಳ್ಳುತ್ತಾರೆ.ಈ ತ್ಯಾಗ ಅನ್ನುವುದು ನಾವು ದೇವರಿಗೆ ಮುಡಿಕೊಡುತ್ತೇವೆ ಅಂತ ಹರಕೆ ಹೊತ್ತು ದೇವರಿಗೆ ಕೂದಲು ಕೊಟ್ಟ ಹಾಗೇ. ಕೂದಲು ಎಷ್ಟು ಸಲ ತೆಗೆದರು ಮತ್ತೆ ಬರುತ್ತದೆ ಅನ್ನುವುದು ಎಲ್ಲರಿಗೂ ಗೊತ್ತು ಅದಕ್ಕೆ ದೇವರಿಗೆ ಅದನ್ನೇ ಕೊಡುತ್ತಾರೆ, ಹಾಗೆಯೇ ಹಣ,ಕೆಲಸ ತ್ಯಾಗ ಮಾಡಿದರೆ ಮರಳಿ ಸಿಗುವುದಿಲ್ಲ ಅಂತ ಗೊತ್ತು.ಒಂದು ಪ್ರೀತಿ ಹೋದರೆ ಇನ್ನೊಂದು ಪ್ರೀತಿ ಸಿಗುತ್ತದೆ ಅನ್ನುವ ಅದಮ್ಯ ವಿಶ್ವಾಸ ಅದಕ್ಕೆ ಎಲ್ಲರೂ ಪ್ರೀತಿ ತ್ಯಾಗ ಮಾಡಲಿಕ್ಕೆ ಸಿದ್ಧರಿರುತ್ತಾರೆ ಅಷ್ಟೇ...
 "ಪ್ರೀತಿ ಮಧುರ ತ್ಯಾಗ ಅಮರ" ಅನ್ನುತ್ತ ಇನ್ನೊಂದು ಹುಡುಗಿಗೆ ಕಾಳು ಹಾಕುವುದಕ್ಕೆ ರೆಡಿಯಾಗುತ್ತಾರೆ ಪ್ರೀತಿಯನ್ನು ತ್ಯಾಗ ಮಾಡಿದವರು....


        ಎನ್.ಆರ್.ಕೆ.ನೇರಳಕಟ್ಟೆ...

Tuesday, 12 March 2013

" ನಾನು ನನ್ನ ಹೃದಯ"

ಕೆಲಸ ಮತ್ತು ಕ್ರಿಕೇಟ್ ಆಡುವ ಭರದಲ್ಲಿ ನನ್ನ ಹೃದಯವನ್ನು ಸರಿಯಾಗಿ ವಿಚಾರಿಸಿಕೊಳ್ಳಲೇ ಇಲ್ಲ.ಯಾಕೋ ಹೃದಯ ತುಂಬಾ ಮೌನವಾಗಿ ಬಿಟ್ಟಿದೆ.ಕಾರಣವೇ ತಿಳಿದಿಲ್ಲ.ಅದಕೋಸ್ಕರವೇ ಈ ದಿನ ಸಮಯ ತೆಗೆದುಕೊಂಡು ಹೃದಯವನ್ನು ಮಾತನಾಡಿಸಿದೆ. ಹಲೋ ಏನಾಯ್ತು ತುಂಬಾ ಮೌನವಾಗಿರುತ್ತಿಯ ನೀನು ಇತ್ತಿಚೆಗೆ ಅಂದಾಗ ಹೃದಯ ಬೇಸರದಲ್ಲಿ ಹೇಳಿತು ನನ್ನ ಜೊತೆ ಮಾತನಾಡಲು ಯಾರು ಇಲ್ಲ, ನನ್ನೊಡಲಿನ ಪಿಸುಮಾತನ್ನು ಹೇಳಲು ಇನ್ನೊಂದು ಹೃದಯ ಬೇಕು ಅಂದಿತು.ಅದಕ್ಕೆ ನಾನು ಹೇಳಿದೆ.ನಾನೇ ಇದ್ದಿನಲ್ಲಾ ನನ್ನ ಹತ್ತಿರವೇ ಹೇಳು ನಿನ್ನ ಪಿಸುಮಾತುಗಳನ್ನು.ಹೃದಯ ಸಿಟ್ಟಿನಲ್ಲಿ ಹೇಳಿತು ನೀನು ಯಾವಾಗ ನನ್ನ ಮಾತು ಕೇಳಿದ್ದಿಯಾ ಯಾವಾಗ ನೋಡಿದರೂ ಕ್ರಿಕೇಟ್ ಆಡುತ್ತಿಯಾ ಅದನ್ನು ಬಿಟ್ಟರೆ ಫೇಸಬುಕ್,ವಾಟ್ಸಫ್ ನಲ್ಲಿ ಬ್ಯುಸಿ ಇರುತ್ತಿಯಾ ನನ್ನ ಮಾತು ಕೇಳಲ್ಲಿಕೆ ನಿನಗೆ ಸಮಯವಾದರೂ ಎಲ್ಲಿದೆ ಅಂತ ವ್ಯಂಗ್ಯ ಮಾಡಿತು.ನನಗೂ ಹೌದು ಅನಿಸಿತು ಹೃದಯದ ಮಾತು.ಆಯ್ತು ಮಾರಾಯ ಈಗ ಬೇಕು ಅಂದ ಕೂಡಲೇ ನಿನಗೆ ಎಲ್ಲಿಂದ ತರುವುದು ಇನ್ನೊಂದು ಹೃದಯವನ್ನು ಅಂದೆ.ಅದಕ್ಕೆ ಹೃದಯ ನೀನು ಹತ್ತನೇಯ ತರಗತಿ ಪಾಸಾದಾಗಲೇ ನಿನಗೆ "ಹಾಸಿನಿ"ಯನ್ನು ತೋರಿಸಿದೆ.ನೀನು ಮಾತ್ರ ಅವಳನ್ನು ನೋಡದೇ ಆಟ ಆಡಿಕೊಂಡೆ ಕಾಲ ಕಳೆದೆ.ಪಿಯುಸಿಯಲ್ಲಿ ಸಿಕ್ಕ ಮುದ್ದು ಮುಖದ ಹುಡುಗಿ ಹಾಸಿನಿ ನೋಡಿದ ಕೂಡಲೇ ಮನಸ್ಸಿಗೆ ಇಷ್ಟವಾಗಿದ್ದಳು.ಪ್ರೀತಿಸಬೇಕು ಅಂದುಕೊಂಡಿದ್ದೆ ಆದರೆ ಕಾಲೇಜಿಗೆ ಸರಿಯಾಗಿ ಬರದೇ ಆಡುತ್ತಿದ್ದ ನನಗೆ ಅವಳು ನೆನಪಾಗಲೇ ಇಲ್ಲ.ಈಗ ಮತ್ತೆ ನೆನಪಾದಳು ಸ್ವಲ್ಪ ಫೀಲ್ ಆಯಿತು ಅಷ್ಟೇ.ಹಳೆಯದನ್ನು ಆಲೋಚಿಸುವುದರಿಂದ ಪ್ರಯೋಜನವಿಲ್ಲ ಅಂತ ಗೊತ್ತು ಅದಕ್ಕೆ ಅದನ್ನು ಅಲ್ಲೆ ಮರೆತು ನಾ ಹೇಳಿದೆ ಹೃದಯಕ್ಕೆ ನಾನು ಇರುವ ಚಂದಕ್ಕೆ ನನ್ನನ್ನು ನೋಡುವುದೇ ಕಷ್ಟ ಅಂಥದರಲ್ಲಿ ಯಾರು ಹೃದಯ ಕೊಡುತ್ತಾರೆ ಮಾರಾಯ ಅಂದೆ.ಹೃದಯ ಯಾವತ್ತು ಅಂದವನ್ನು ಬಯಸುವುದಿಲ್ಲ ತಿಳಿದುಕೊ. ನೀನೊಮ್ಮೆ ಹೃದಯಕ್ಕಾಗಿ ಪ್ರಯತ್ನಿಸು ಸಿಕ್ಕೆ ಸಿಗುತ್ತದೆ ಅನ್ನುವ ನಂಬಿಕೆಯಿದೆ ನನಗೆ ಅಂದಿತು ಹೃದಯ.ಹೃದಯಕ್ಕೆ ಇರುವ ನಂಬಿಕೆ ನನಗೆ ಇಲ್ಲವಾಗಿತ್ತು.ಆದರೂ ಹೃದಯದ ಖುಷಿಗಾಗಿ ಪ್ರಯತ್ನಿಸುತ್ತೇನೆ ಅಂದಾಗ.ಹೃದಯ ನಗುತ್ತ ನೀನು ಏನು ಪ್ರಯೋಜನಕ್ಕೆ ಬಾರದವ ಇಂದಿನ ಹುಡುಗರು ಎಂಟನೇಯ ತರಗತಿಯಿಂದ ಹೃದಯದ ಹುಡುಕಾಟ ಶುರುಮಾಡಿ ಮದುವೆಯಾಗುವುದರೊಳಗೆ ತಮ್ಮ ಹೃದಯಕ್ಕೆ ಹತ್ತಾರು ಹುಡುಗಿಯರ ಹೃದಯವನ್ನು ಪರಿಚಯಿಸುತ್ತಾರೆ ಅಂಥದರಲ್ಲಿ ನೀನು ಇದ್ದೀಯಾ ೨೫ ವರ್ಷ ಆಯಿತು ಇಲ್ಲಿ ತನಕ
ನನಗೆ ಒಂದು ಹೃದಯವನ್ನು ಪರಿಚಯಿಸಲಿಲ್ಲ ಕೇವಲ ಕ್ರಿಕೇಟ್ ಆಡಿ ಕಾಲ ಕಳೆದೆ ಎಂದು ಕುಹಕವಾಡಿತು.ಅದರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ.
ಹೃದಯದ ಮಾತು ಕೇಳಿದ ಮೇಲೆ ಅದಕೋಸ್ಕರ ಇನ್ನೊಂದು ಹೃದಯದ ಹುಡುಕಾಟ ಶುರುಮಾಡಿದೆ.ಬೇಕು ಅಂದಾಗ ದೊರೆಯಲು ಹೃದಯ ಅನ್ನುವುದು ಅಂಗಡಿಯಲ್ಲಿ ಮಾರಾಟ ಮಾಡುವ ವಸ್ತುವೇ..ಸಿಗಲಿಲ್ಲ ಅನ್ನುವುದಕ್ಕಿಂತ ಪ್ರಯತ್ನ ಮಾಡಲಿಲ್ಲ ಅನ್ನುವುದು ಸರಿ ಅನಿಸುತ್ತದೆ.ಕ್ರಿಕೇಟ್ ಆಡಿ ಬರುವಾಗ ರಸ್ತೆಯಲ್ಲಿ ಹುಡುಗಿಯರನ್ನು ನೋಡಿದಾಗ ಮಾತ್ರ ಹೃದಯದ ಮಾತು ನೆನಪಾಗುತ್ತಿತ್ತು.ಆಮೇಲೆ ಮತ್ತೆ ಮರೆತುಹೋಗುತ್ತಿತ್ತು.ಹೃದಯ ಮತ್ತೆ ಕೊರಗಲು ಶುರುಮಾಡಿತು.ನಾ ಹೇಳಿದೆ ನನ್ನ ಪ್ರಯತ್ನವೆಲ್ಲಾ ಮಾಡಿದೆ ಹೃದಯ ಸಿಗಲಿಲ್ಲ ಅದಕ್ಕೆ ನಾನು ಏನು ಮಾಡುವುದು ಮಾರಾಯ ಅಂದೆ.ಅದಕ್ಕೆ ಹೃದಯ ಗಂಟೆಗಟ್ಟಲೇ ಫೇಸಬುಕನಲ್ಲಿ ಇರುತ್ತಿಯಾ ಅಲ್ಲಾದರೂ ಪ್ರಯತ್ನಿಸು ಅಂದಿತು.ನನಗೂ ಸರಿ ಅನಿಸಿತು.
ಹೃದಯದ ಕಾಟ ತಾಳಲಾರದೇ ಫೇಸಬುಕ್ ನಲ್ಲಿ ಇರುವುದರಲ್ಲಿ ನೋಡಲ್ಲಿಕೆ ಸ್ವಲ್ಪ ಚಂದ ಇರುವ ಪೋಟೋ ಹಾಕಿದೆ.ಅಲ್ಲಿಯ ತನಕ ನನ್ನನ್ನು ಯಾರು ನೋಡಿರಲಿಲ್ಲ ಅಂತೂ ನನ್ನ ಮುಖದ ದರ್ಶನ ಫೇಸಬುಕ್ ಗೆಳೆಯರಿಗೆ ಆಯಿತು.ನಾ ಹಾಕಿದ ನನ್ನ ಪೋಟೊಗೆ ಸುಮಾರು ೨೦ ಲೈಕ್ ಮತ್ತು ೧೦ ಕಮೆಂಟ್ಸ್ ಬಂದಿತು.ನೋಡಿ ಸ್ವಲ್ಪ ಖುಷಿಯಾಯಿತು.ಯಾರು ಯಾರು ಲೈಕ್ ಮಾಡಿದ್ದು ಅಂತ ನೋಡಿದಾಗ ಬರೇ ಹುಡುಗರು ಒಂದೇ ಒಂದು ಹುಡುಗಿ ನನ್ನ ಪೋಟೊ ಲೈಕ್ ಮಾಡಿರಲಿಲ್ಲ ತುಂಬಾ ಬೇಸರವಾಯಿತು.ನನ್ನ ಹತ್ತಿರ ಹೃದಯ ಹುಡುಕಲ್ಲಿಕ್ಕೆ ಆಗದ ಕೆಲಸ ಅಂತ ಗೊತ್ತಾಯಿತು.ಅದಕ್ಕೆ ಹೃದಯದ ಹತ್ತಿರ ಸಾರಿ ಕೇಳಿ ನನ್ನ ಹತ್ತಿರ ನಿನಗೆ ಹೃದಯ ಹುಡುಕುವುದಕ್ಕೆ ಆಗುವುದಿಲ್ಲ ಮಾರಾಯ ಅಂದಾಗ.ಹೃದಯ ನಗುತ್ತ ಅದು ನನಗೆ ಮೊದಲೇ ಗೊತ್ತಿತ್ತು ನಿನ್ನ ಹತ್ತಿರ ಆಗದ ಕೆಲಸವೆಂದು ಆದರೂ ನಿನ್ನನ್ನು ಪರೀಕ್ಷಿಸುವ ಅಂತ ಮಾಡಿದೆ ಅದರಲ್ಲಿ ನೀನು ಫೇಲಾದೆ.ನೀನು ಹೃದಯದ ಹುಡುಕುವುದು ಬಿಟ್ಟು ಮದುವೆಯಾಗು. ನಿನ್ನ ಹೆಂಡತಿಯಾಗಿ ಬರುವ ಹುಡುಗಿಯ ಹೃದಯದ ಜೊತೆ ನನ್ನ ಇಷ್ಟು ವರ್ಷದ ತನ್ನೊಡಲಿನ ಪಿಸುಮಾತುಗಳನ್ನು ಅವಳಲ್ಲಿ ಹೇಳಿ ಸಂಭ್ರಮಿಸುತ್ತೇನೆ ಅಂದಾಗ ನನಗೆ ತುಂಬಾ ಖುಷಿ ಆಯಿತು ಅಂತೂ ಹೃದಯದ ಕಾಟ ತಪ್ಪಿತು ಅಂತ..
ಆದರೂ ಮನ್ನಸ್ಸಿನಲ್ಲಿ ಒಂದು ನೋವು ಕಾಡುತ್ತಿತ್ತು.ನಾನು ಅಷ್ಟೋಂದು ಕುರೂಪಿನಾ..? ಒಂದೇ ಒಂದು ಹುಡುಗಿ ನನ್ನ ಪೋಟೊವನ್ನು ಲೈಕ್ ಮಾಡಿರಲಿಲ್ಲ.ಅದಕ್ಕೆ ಕಾರಣವೇನು ಅಂತ ಚಿಂತಿಸುತ್ತಿದ್ದೆ.ಕನ್ನಡಿಯ ಮುಂದೆ ನಿಂತು ನನ್ನನ್ನು ನೋಡಿದೆ ನೋಡಲ್ಲಿಕ್ಕೆ ಅಷ್ಟೊಂದು ಚಂದವಿಲ್ಲ ನಿಜ ಆದರೆ ನೋಡದೇ ಇರುವಷ್ಟು ಕೆಟ್ಟದಾಗಿರಲಿಲ್ಲ ನನ್ನ ಮುಖ .ಯಾಕೆ ಹೀಗಾಯ್ತು ಅಂತ ಫೇಸಬುಕನಲ್ಲಿ ಮತ್ತೆ ಹುಡುಕಿದೆ.ಗೆಳೆಯರು ಯಾರು ಯಾರು ಅಂತ ಚೆಕ್ ಮಾಡಿದಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ.ಯಾಕೆಂದರೆ ನನ್ನ ಫ್ರೆಂಡ್ಸ್ ಲಿಸ್ಟನಲ್ಲಿ ಒಂದೇ ಒಂದು ಹುಡುಗಿ ಇರಲಿಲ್ಲ.ಯಾವ ಹುಡುಗಿಯು ನನ್ನ ಪೋಟೊ ನೋಡಿಲ್ಲ ಅದಕ್ಕೆ ಯಾರು ಲೈಕ್ ಮಾಡಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಖುಷಿಪಟ್ಟೆ...ಮತ್ತೆ ಕ್ರಿಕೇಟ್ ಆಡಲ್ಲಿಕ್ಕೆ ಹೊರಟೆ ನೆಮ್ಮದಿಯಿಂದ.....

                                       ಎನ್.ಆರ್.ಕೆ.ನೇರಳಕಟ್ಟೆ....

Saturday, 9 March 2013

"ಹನಿಗವನಗಳು"

1)
ತನಗೊಪ್ಪುವ
ಹೃದಯದ
ಹುಡುಕಾಟದಲ್ಲಿದೆ
ನನ್ನ ಹೃದಯ
ತನ್ನೊಡಲಿನಲಿ ತುಂಬಿರುವ
ಪ್ರೇಮಧಾರೆಯನು ನೀಡಲು...

ಎನ್.ಆರ್.ಕೆ.ನೇರಳಕಟ್ಟೆ....


2)
ನನ್ನೊಲುಮೆಯ ನೆನಪೇ
ಮೋಸಹೋದ ಹಳೆಯ
ನೆನಪುಗಳನ್ನು ಮತ್ತೆ ಮತ್ತೆ
ನೆನಪಿಸಿ ಭಯಪಡಿಸಬೇಡ
ಯಾಕೆಂದರೆ
ನಾನು ಮತ್ತೆ ಪ್ರೀತಿ
ಮಾಡಬೇಕು ಅಂದುಕೊಂಡಿದ್ದೀನಿ...

ಎನ್.ಆರ್.ಕೆ.ನೇರಳಕಟ್ಟೆ


3)
ಪ್ರೀತಿಯ ಅರ್ಥ ಗೊತ್ತಾ
ಅಂತ ಕೇಳಿದೆ ನೀನು
ಪ್ರೀತಿ ಅಂದರೆ ಏನು ಅಂತ
ಮೊದಲೇ ಗೊತ್ತಿದ್ದರೆ
ನಾನೇಕೆ
ನಿನ್ನನ್ನು ಪ್ರೀತಿಸುತ್ತಿದ್ದೆ.....

ಎನ್.ಆರ್.ಕೆ.ನೇರಳಕಟ್ಟೆ...


4)
ನಗು ಎಲ್ಲರಿಗೂ ಒಳ್ಳೆಯದನ್ನೇ
ಮಾಡುತ್ತದೆ ಅನ್ನುತ್ತಾರೆ
ಆದರೆ
ಹುಡುಗಿಯರ ನಗು ಹುಡುಗರ
ಜೀವನವನ್ನೇ ಸರ್ವನಾಶ
ಮಾಡುತ್ತಿದೆಯೆಲ್ಲಾ.....

ಎನ್.ಆರ್.ಕೆ.ನೇರಳಕಟ್ಟೆ...


5)
"ಮನಸ್ಸಿನ ಮಾತು ಕೇಳು ಅಂದರು
ಕೇಳಿದೆ
ಪರಿಣಾಮ
ನೂರಾರು ಗರ್ಲ್ ಫ್ರೆಂಡ್ಸಗಳು...."

ಎನ್.ಆರ್.ಕೆ.ನೇರಳಕಟ್ಟೆ..


6)
ಇಷ್ಟ ಬಂದಾಗ ತೆಗೆದುಕೊಂಡು
ಬೇಡವಾದಾಗ ಮರಳಿ ಕೊಡಲು
ಪ್ರೀತಿ ಅನ್ನುವುದು ಹಳೆಯ ಸಾಲವೇ...?

 ಎನ್.ಆರ್.ಕೆ.ನೇರಳಕಟ್ಟೆ....


7)
ಮನಸ್ಸಿನಲ್ಲಿ ಮೊದಲೇ ಒಬ್ಬರೋ ಇಬ್ಬರನ್ನು
ಇಷ್ಟಪಟ್ಟಿರುತ್ತಾರೆ ಆದರೂ
ಇನ್ನೋಬ್ಬರನ್ನು ಆಕರ್ಷಿಸಬೇಕೆನ್ನುವ
ಹುಚ್ಚು ಬಯಕೆ ಇಂದಿನ ಹುಡುಗ-ಹುಡುಗಿಯರಿಗೆ....
  

 -ಎನ್.ಆರ್.ಕೆ.ನೇರಳಕಟ್ಟೆ...

8)
ಹೆಣ್ಣಿನ ಮನಸ್ಸು
ಕತ್ತಲೆಯ ಕೋಣೆಯಂತೆ
ಎಷ್ಟು ನೋಡಿದರೂ
ಒಳಗಿರುವ
ಒಳ್ಳೆಯತನ, ಕೆಟ್ಟತನ
ಏನೂ ಕಾಣಿಸದು ಯಾರಿಗೂ..

-ಎನ್.ಆರ್.ಕೆ.ನೇರಳಕಟ್ಟೆ.. 

9)
" ಸಾಕು ನಾಯಿ"

 ನನ್ನ ಕಥೆ,ಕವನಗಳು
 ಸಾಕುನಾಯಿಯ ತರಹ
 ಎಲ್ಲಿಗೆ ಕಳುಹಿಸಿದರೂ
 ಮರಳಿ ನನ್ನ ಬಳಿಗೆ
 ತಿರುಗಿ ಬರುತ್ತವೆ....

    ಎನ್.ಆರ್.ಕೆ.ನೇರಳಕಟ್ಟೆ...

10)
"ಸಮಾಧಿ"

ಪ್ರೀತಿಸಿದವಳ ಗೋರಿಯ ಮುಂದೆ
ಅಳುತ್ತ ಮನೆಯವರನ್ನು
ದೂರ ಮಾಡಿಕೊಂಡು
ಹಳೆಯ ನೆನಪುಗಳನ್ನು ನೆನಪಿಸಿಕೊಂಡು
ಜೀವನಪೂರ್ತಿ ಕಾಲ ಕಳೆದ
ನನಗೆ ತಿಳಿಯಲೇ ಇಲ್ಲ
ನಾ ಸತ್ತಾಗ ನನ್ನ ಸಮಾಧಿಯ ಮುಂದೆ
ಅಳುವವರು ಯಾರು ಇಲ್ಲ ಅಂತ....

       ಎನ್.ಆರ್.ಕೆ.ನೇರಳಕಟ್ಟೆ... 


11)

ಆರೋಗ್ಯವಂತರು
ಹಣಕ್ಕಾಗಿ
ಹೋರಾಡುತ್ತಾರೆ...
ಆರೋಗ್ಯವಿಲ್ಲದವರು
ಬದುಕುವುದಕ್ಕಾಗಿ
ಹೋರಾಡುತ್ತಾರೆ..

    ಎನ್.ಆರ್.ಕೆ.ನೇರಳಕಟ್ಟೆ...


12)

           "ಗ್ರಹಚಾರ"
ಪ್ರೀತಿಗೆ ಮೋಸ
ಮಾಡಿಹೋದವಳ
ಹೆಸರನ್ನು
ಮರೆಯಲು ಆಗದೇ
ಒದ್ದಾಡುತ್ತಿದ್ದ
ನನಗೆ ಅಮ್ಮ ನೋಡಿ
ನಿಶ್ಚಯ ಮಾಡಿದ
ಹುಡುಗಿಯ ಹೆಸರು
ಮೋಸಮಾಡಿ
ಹೋದವಳ ಹೆಸರು
ಒಂದೇ ಆಗಿರಬೇಕೇ...?

  ಎನ್.ಆರ್.ಕೆ.ನೇರಳಕಟ್ಟೆ..
 

13)

ನಿನ್ನೆ ಓದಿದ್ದು,
ನೋಡಿರುವುದನ್ನು
ಇಂದು ಮರೆಯುವ ಮಹಾ
ಮರೆಗುಳಿ ನಾ
ಆದರೆ
ವರ್ಷಗಳೇ ಉರುಳಿಹೋದರೂ
ನೀನು,ನಿನ್ನ ನೆನಪುಗಳು
ನನ್ನ ಮನದಲ್ಲಿ
ಅಚ್ಚಳಿಯದಂತೆ ಉಳಿದಿದೆ
ಇನ್ನು ಮರೆಯಾಗದೇ.....

   ಎನ್.ಆರ್.ಕೆ.ನೇರಳಕಟ್ಟೆ....


14)


 ಮನಸಾರೆ ಇಷ್ಟಪಟ್ಟ
 ಹುಡುಗಿಗೆ ನಾ ಕೊಟ್ಟ
 ಪ್ರಪ್ರಥಮ ಉಡುಗೊರೆ
 ಪುಸ್ತಕ
 "ಹೇಳಿ ಹೋಗು ಕಾರಣ"
 ಆದರವಳು ಕೊನೆಗೂ
 ಕಾರಣವೇ
 ಹೇಳದೆ ಇನ್ನೊಬ್ಬನ
 ಕೈ ಹಿಡಿದು ಹೋದಳು....

       ಎನ್.ಆರ್.ಕೆ.ನೇರಳಕಟ್ಟೆ....
 

  

Friday, 1 March 2013

"ಜೀವನ"

ನಮ್ಮ ಜೀವನವೇನು ಶಾಶ್ವತವೇ?
ಕಾಲನ ಕರೆ ಎಲ್ಲಿ ಯಾವಾಗ
ಬರುವುದೋ ನಮಗೆ ತಿಳಿದಿಲ್ಲ
ಬದುಕೇ ಕ್ಷಣಿಕವಾಗಿರುವಾಗ
ಜೀವನದಲ್ಲಿ ಬರುವ ನೋವು
ನಮಗೆ ಯಾವ ಲೆಕ್ಕ
ದಿನ ಬದಲಾಗುವಂತೆ
ಸಂತಸ, ನೋವುಗಳು
ಬದಲಾಗುತ್ತವೆ
ಆದರೆ ನಾವು ಕೇವಲ
ನೋವುಗಳನ್ನು ನೆನೆಯುತ್ತಾ
ದುಃಖಪಡುವುದು ನಮಗೆ
ನಾವೇ ಮಾಡಿಕೊಳ್ಳುತ್ತಿರುವ ಅನ್ಯಾಯ....

        ಎನ್.ಆರ್.ಕೆ.ನೇರಳಕಟ್ಟೆ....