ತುಂಬಾ ವರ್ಷಗಳಿಂದ ಉದ್ಯೋಗ ಮತ್ತು ಸಂಬಳ ನೀಡುತ್ತಿದ್ದ ಕಂಪನಿ ಇತ್ತೀಚೆಗೆ ತುಂಬಾ ನಷ್ಟದಲ್ಲಿ ನಡೆಯುತ್ತಿದೆ.ಕಂಪನಿಯ ಮಾಲೀಕರು ಕಷ್ಟದಲ್ಲಿದ್ದಾರೆ ಎಂದು ಆ ಕಂಪನಿಯ ಉದ್ಯೋಗಿಗಳು ಒಂದು ತಿಂಗಳು ಸಂಬಳ ತ್ಯಾಗ ಮಾಡಿದರೆ ಮಾಲೀಕರು ಸ್ವಲ್ಪ ಸುಧಾರಿಸುತ್ತಾರೆ ಅಂತ ಎಲ್ಲರಿಗೂ ಗೊತ್ತು ಆದರೂ ಯಾರು ತಮ್ಮ ಸಂಬಳ ತ್ಯಾಗ ಮಾಡುವುದಕ್ಕೆ ಸಿದ್ಧರಿಲ್ಲ...
ತುಂಬಾ ಕಷ್ಟದಲ್ಲಿರುವ ಪ್ರಾಣಸ್ನೇಹಿತನಿಗೆ ಸಹಾಯ ಮಾಡಿರುವ ಹಣವನ್ನು ಕೇಳದೇ ಆ ಹಣವನ್ನು ಕೊಡುವುದು ಬೇಡ ಅಂತ ತ್ಯಾಗ ಮಾಡುವುದಕ್ಕೆ ಯಾರು ಸಿದ್ಧರಿಲ್ಲ...
ಆದರೆ ಎಲ್ಲರೂ ತಮ್ಮ ಪ್ರೀತಿಯನ್ನು ಅವಳಿಗೋಸ್ಕರ ಅವಳ ಮನೆಯವರಿಗೋಸ್ಕರ ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ ಅಂತ ದೊಡ್ಡದಾಗಿ ಎಲ್ಲರೆದುರು ತನ್ನ ತ್ಯಾಗವನ್ನು ಕೊಚ್ಚಿಕೊಳ್ಳುತ್ತಾರೆ.ಈ ತ್ಯಾಗ ಅನ್ನುವುದು ನಾವು ದೇವರಿಗೆ ಮುಡಿಕೊಡುತ್ತೇವೆ ಅಂತ ಹರಕೆ ಹೊತ್ತು ದೇವರಿಗೆ ಕೂದಲು ಕೊಟ್ಟ ಹಾಗೇ. ಕೂದಲು ಎಷ್ಟು ಸಲ ತೆಗೆದರು ಮತ್ತೆ ಬರುತ್ತದೆ ಅನ್ನುವುದು ಎಲ್ಲರಿಗೂ ಗೊತ್ತು ಅದಕ್ಕೆ ದೇವರಿಗೆ ಅದನ್ನೇ ಕೊಡುತ್ತಾರೆ, ಹಾಗೆಯೇ ಹಣ,ಕೆಲಸ ತ್ಯಾಗ ಮಾಡಿದರೆ ಮರಳಿ ಸಿಗುವುದಿಲ್ಲ ಅಂತ ಗೊತ್ತು.ಒಂದು ಪ್ರೀತಿ ಹೋದರೆ ಇನ್ನೊಂದು ಪ್ರೀತಿ ಸಿಗುತ್ತದೆ ಅನ್ನುವ ಅದಮ್ಯ ವಿಶ್ವಾಸ ಅದಕ್ಕೆ ಎಲ್ಲರೂ ಪ್ರೀತಿ ತ್ಯಾಗ ಮಾಡಲಿಕ್ಕೆ ಸಿದ್ಧರಿರುತ್ತಾರೆ ಅಷ್ಟೇ...
"ಪ್ರೀತಿ ಮಧುರ ತ್ಯಾಗ ಅಮರ" ಅನ್ನುತ್ತ ಇನ್ನೊಂದು ಹುಡುಗಿಗೆ ಕಾಳು ಹಾಕುವುದಕ್ಕೆ ರೆಡಿಯಾಗುತ್ತಾರೆ ಪ್ರೀತಿಯನ್ನು ತ್ಯಾಗ ಮಾಡಿದವರು....
ಎನ್.ಆರ್.ಕೆ.ನೇರಳಕಟ್ಟೆ...
ತುಂಬಾ ಕಷ್ಟದಲ್ಲಿರುವ ಪ್ರಾಣಸ್ನೇಹಿತನಿಗೆ ಸಹಾಯ ಮಾಡಿರುವ ಹಣವನ್ನು ಕೇಳದೇ ಆ ಹಣವನ್ನು ಕೊಡುವುದು ಬೇಡ ಅಂತ ತ್ಯಾಗ ಮಾಡುವುದಕ್ಕೆ ಯಾರು ಸಿದ್ಧರಿಲ್ಲ...
ಆದರೆ ಎಲ್ಲರೂ ತಮ್ಮ ಪ್ರೀತಿಯನ್ನು ಅವಳಿಗೋಸ್ಕರ ಅವಳ ಮನೆಯವರಿಗೋಸ್ಕರ ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ ಅಂತ ದೊಡ್ಡದಾಗಿ ಎಲ್ಲರೆದುರು ತನ್ನ ತ್ಯಾಗವನ್ನು ಕೊಚ್ಚಿಕೊಳ್ಳುತ್ತಾರೆ.ಈ ತ್ಯಾಗ ಅನ್ನುವುದು ನಾವು ದೇವರಿಗೆ ಮುಡಿಕೊಡುತ್ತೇವೆ ಅಂತ ಹರಕೆ ಹೊತ್ತು ದೇವರಿಗೆ ಕೂದಲು ಕೊಟ್ಟ ಹಾಗೇ. ಕೂದಲು ಎಷ್ಟು ಸಲ ತೆಗೆದರು ಮತ್ತೆ ಬರುತ್ತದೆ ಅನ್ನುವುದು ಎಲ್ಲರಿಗೂ ಗೊತ್ತು ಅದಕ್ಕೆ ದೇವರಿಗೆ ಅದನ್ನೇ ಕೊಡುತ್ತಾರೆ, ಹಾಗೆಯೇ ಹಣ,ಕೆಲಸ ತ್ಯಾಗ ಮಾಡಿದರೆ ಮರಳಿ ಸಿಗುವುದಿಲ್ಲ ಅಂತ ಗೊತ್ತು.ಒಂದು ಪ್ರೀತಿ ಹೋದರೆ ಇನ್ನೊಂದು ಪ್ರೀತಿ ಸಿಗುತ್ತದೆ ಅನ್ನುವ ಅದಮ್ಯ ವಿಶ್ವಾಸ ಅದಕ್ಕೆ ಎಲ್ಲರೂ ಪ್ರೀತಿ ತ್ಯಾಗ ಮಾಡಲಿಕ್ಕೆ ಸಿದ್ಧರಿರುತ್ತಾರೆ ಅಷ್ಟೇ...
"ಪ್ರೀತಿ ಮಧುರ ತ್ಯಾಗ ಅಮರ" ಅನ್ನುತ್ತ ಇನ್ನೊಂದು ಹುಡುಗಿಗೆ ಕಾಳು ಹಾಕುವುದಕ್ಕೆ ರೆಡಿಯಾಗುತ್ತಾರೆ ಪ್ರೀತಿಯನ್ನು ತ್ಯಾಗ ಮಾಡಿದವರು....
ಎನ್.ಆರ್.ಕೆ.ನೇರಳಕಟ್ಟೆ...