Wednesday, 20 May 2015

"ಬುದ್ಧಿವಂತಿಕೆ"

ಪ್ರತಿಷ್ಟಿತ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದರು. ಇರುವ ಒಂದು ಹುದ್ದೆಗೆ 8 ಜನ ಅಭ್ಯರ್ಥಿಗಳು ಸಂದರ್ಶನಕ್ಕೆ ಬಂದಿದ್ದರು. 3 ಸುತ್ತು ನಡೆದ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮವಾಗಿ ಬರೆದಿದ್ದರು.ಯಾರನ್ನು ಆಯ್ಕೆ ಮಾಡುವುದು ಅಂತ ಗೊಂದಲದಲ್ಲಿದ್ದರು ಕಂಪೆನಿಯ ಎಮ್.ಡಿ. ಬಂದು ಎಲ್ಲಾ ಅಭ್ಯರ್ಥಿಗಳನ್ನು ಕರೆದು ಕೇವಲ 2 ನಿಮಿಷ ಅವಧಿಯಲ್ಲಿ ಒಂದು ಸುಂದರ ಆನೆಯ ಚಿತ್ರ ಬಿಡಿಸಿ ಅಂದರು. ಯಾರು ಸಹ ಇಂಥ ಪ್ರಶ್ನೆಯನ್ನು ಕೇಳುತ್ತಾರೆ ಅಂತ ಅಂದುಕೊಂಡಿರಲಿಲ್ಲ.ಎಲ್ಲರೂ ಗಲಿಬಿಲಿಗೊಂಡು ಚಿತ್ರ ಬಿಡಿಸಲ್ಲಿಕ್ಕೆ ಶುರುಮಾಡಿದರು. 2 ನಿಮಿಷ ಅವಧಿ ಪೂರ್ಣಗೊಂಡಿತು.ಯಾರು ಆನೆಯ ಚಿತ್ರವನ್ನು ಸಂಪೂರ್ಣಗೊಳಿಸಿರಲಿಲ್ಲ. ಆದರೆ ಒಬ್ಬ ಮಾತ್ರ ಆನೆಯ ಚಿತ್ರ ಬಿಡಿಸದೇ ಒಂದು ಗೋಡೆಯ ಚಿತ್ರ ಬಿಡಿಸಿ ಅದರ ಪಕ್ಕದ್ದಲ್ಲಿ ಚಂದವಾಗಿ ಆನೆಯ ಸೊಂಡಿಲ ಚಿತ್ರ ಬರೆದಿದ್ದ. ಆ ಚಿತ್ರ ನೋಡಿದ ಎಮ್.ಡಿ. ಅವನನ್ನು ಕರೆದು ಏನಿದು ಅಂತ ಕೇಳಿದ ಅದಕ್ಕೆ ಅವನು ಅದು ಆನೆಯ ಚಿತ್ರವೇ ಆದರೆ ಆ ಆನೆ ಗೋಡೆಯ ಪಕ್ಕದಲ್ಲಿ ನಿಂತಿದೆ ಅದಕ್ಕೆ ಅದರ ಸೊಂಡಿಲು ಮಾತ್ರ ಕಾಣುತ್ತಿದೆ ಸರ್ ಅಂದುಬಿಟ್ಟ. ಎಮ್.ಡಿ.ಗೆ ತುಂಬಾ ಖುಷಿಯಾಯಿತು ಅವನ ಸಮಯಪ್ರಜ್ನೆ,ಬುದ್ದಿವಂತಿಕೆ ನೋಡಿ ಅವನನ್ನೆ ಆ ಹುದ್ದೆಗೆ ಆಯ್ಕೆ ಮಾಡಿದರು. ಎನ್.ರಾಜೇಶ್.ಕುಮಾರ್.ನೇರಳಕಟ್ಟೆ.