Saturday, 20 April 2013

"ದುರಂತ ಪ್ರೇಮಕಥೆ"



 ಗುರುವಾರ ಬೆಳಿಗ್ಗೆ ೬ ಗಂಟೆಗೆ ಎದ್ದು ಕ್ರಿಕೇಟ್ ಆಡುವುದಕ್ಕೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಒಂದು ಹುಡುಗಿಯನ್ನು ನೋಡಿದೆ ಅಷ್ಟೋಂದು ಸುಂದರಿ ಅಲ್ಲ.ಆದರೂ ನೋಡಿದ ಕೂಡಲೇ ತುಂಬಾ ಇಷ್ಟವಾಗಿದ್ದಳು.ಮನಸ್ಸು ಹೇಳಿತು ನಿನಗೆ ಸರಿ ಜೋಡಿ ಈ ಹುಡುಗಿ ಅಂದಿತು.ಹೃದಯ ಒಂದು ಹೆಜ್ಜೆ ಮುಂದು ಹೋಗಿ ಪ್ರೀತಿಸುವುದಾದರೆ ಇವಳನ್ನೇ ಪ್ರೀತಿಸು ಅಂದಿತು.ಮನಸ್ಸು ಮತ್ತು ಹೃದಯದ ಮಾತು ಕೇಳಿ ಧೈರ್ಯ ತಂದುಕೊಂಡು ಅವಳ ಹತ್ತಿರ ಹೋಗಿ ಭಯದಲ್ಲಿ "ನನ್ನನ್ನು ಪ್ರೀತಿಸುತ್ತೀರಾ" ಅಂತ ಕೇಳುವುದು ಬಿಟ್ಟು "ನನ್ನನ್ನು ಮದುವೆಯಾಗುತ್ತೀರಾ"ಅಂತ ಕೇಳಿದೆ.ಅದಕ್ಕೆ ಅವಳು ನಗುತ್ತ "ಆಯ್ತು ನಮ್ಮ ತಂದೆಯನ್ನು ಒಪ್ಪಿಸಿ ಮೊದಲು ಆಮೇಲೆ ನೋಡೋಣ"ಅಂತ ಹೇಳಿ ಮನೆ ವಿಳಾಸ ಕೊಟ್ಟು "ತಂದೆ ಸಂಜೆ ಇರುತ್ತಾರೆ ಬನ್ನಿ" ಅಂತ ಹೇಳಿ ನಗುತ್ತ ಹೊರಟುಹೋದಳು.ನನಗೆ ಪ್ರಪಂಚ ಗೆದ್ದಷ್ಟು ಖುಷಿ ನನ್ನ ಮೊದಲ ಪ್ರಯತ್ನವೇ ಜಯಶಾಲಿಯಾಗಿದ್ದಕ್ಕೆ...
 ಸಂಜೆ ಇರುವುದರಲ್ಲಿ ಒಳ್ಳೆಯ ಬಟ್ಟೆ ಧರಿಸಿಕೊಂಡು ಬೈಕ್ ಹತ್ತಿಕೊಂಡು ಅವರ ಮನೆ ಹತ್ತಿರ ಹೋದೆ.ಅವಳ ಮನೆಯ ತುಂಬಾ ಜನ ಸೇರಿದ್ದರು.ಏನೋ ಸಮಾರಂಭ ನಡೆಯುವ ಹಾಗಿತ್ತು,ನಾನಂದುಕೊಂಡೆ ಅವಳ ನಿಶ್ಚಿತಾರ್ಥವಿರಬೇಕು.ತುಂಬಾ ಬೇಸರವಾಯಿತು.ಆದರೂ ಸ್ವಲ್ಪ ಧೈರ್ಯ ತಂದುಕೊಂಡು ಅಲ್ಲಿದ್ದ ಒಬ್ಬ ಹುಡುಗನನ್ನು ಕೇಳಿದೆ."ಆ ಮನೆಯಲ್ಲಿ ಏನು ಪ್ರೋಗ್ರಾಮ್ ಎಲ್ಲರೂ ತುಂಬಾ ಖುಷಿಯಲ್ಲಿದ್ದಾರಲ್ಲ" ಅದಕ್ಕೆ ಆ ಹುಡುಗ ಅಲ್ಲಿ ನಿಂತುಕೊಂಡಿರುವ ಹುಡುಗಿಯನ್ನು ನೋಡಿ ಅಂದ.ನಾನು ನೋಡಿದೆ ಬೆಳಿಗ್ಗೆ ನೋಡಿದ ಹುಡುಗಿ ಅಲ್ಲಿದ್ದಳು".ಆ ಹುಡುಗ ಹೇಳಿದ "ಅವಳ ಅಪ್ಪ ೩ ಕೊಲೆ ಮಾಡಿ ಜೈಲಿಗೆ ಹೋಗಿ ಬೇಲಿನಲ್ಲಿ ಮತ್ತೆ ವಾಪಾಸು ಬರುತ್ತಿದ್ದಾರೆ ಇವತ್ತು ಅದಕ್ಕೆ ಈ ಸಂಭ್ರಮ ಸಡಗರ" ಅಂದ ಹುಡುಗ.ಅವನ ಮಾತು ಕೇಳಿದ ಉಸಿರು ನಿಂತ ಹಾಗಾಯಿತು.ಆ ಹುಡುಗಿ ಎಷ್ಟು ಕಿಲಾಡಿ ಸೀದಾ ಪರಲೋಕಕ್ಕೆ ಕಳುಹಿಸುವ ಪ್ಲಾನ್ ಅವಳದು.ತಂದೆ ಹತ್ತಿರ ಮಾತನಾಡಿ ಅಂದಾಗಲೇ ನಾನು ಸ್ವಲ್ಪ ಜಾಗ್ರತೆ ವಹಿಸಬೇಕಿತ್ತು ಅಲ್ವಾ....
 "ನಿನಗೆ ಈ ಹುಡುಗಿ ಸರಿಯಾದವಳು,ಪ್ರೀತಿಸು ಅಂತ ಹೇಳಿ ನನ್ನ ಜೀವನವನ್ನೇ ನಾಶಮಾಡುತ್ತಿದ್ದೀರಿ".ಅಂತ ಮನಸ್ಸು ಹೃದಯಕ್ಕೆ ಸರಿಯಾಗಿ ಬೈದು ಜೀವ ಇದ್ದರೆ ಇನ್ನೊಬ್ಬಳನ್ನು ಪ್ರೀತಿ ಮಾಡಬಹುದು ಅಂತ ಹೇಳಿ ಬೈಕ್ ರಿವರ್ಸ್ ತೆಗೆದುಕೊಂಡು ಆ ಮನೆ ಕಡೆ ನೋಡದೆ ನಮ್ಮ ಮನೆಗೆ ಬಂದೆ.ಬೆಳಿಗ್ಗೆ ಹುಟ್ಟಿದ ಪ್ರೀತಿ ಸಂಜೆ ದುರಂತದಲ್ಲಿ ಅಂತ್ಯಗೊಂಡಿತು ನನ್ನ ಮೊದಲ ಪ್ರೀತಿ.......

           ಎನ್.ರಾಜೇಶ್.ಕುಮಾರ್.ನೇರಳಕಟ್ಟೆ

No comments:

Post a Comment